ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ನಾಣಿಕಟ್ಟಾ: ಯಕ್ಷ ವೆಭವ, ಕಲಾವಿದರಿಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 21 , 2015
ಫೆಬ್ರವರಿ 21, 2015

ನಾಣಿಕಟ್ಟಾ: ಯಕ್ಷ ವೆಭವ, ಕಲಾವಿದರಿಗೆ ಸನ್ಮಾನ

ಶಿರಸಿ : ತಾಲೂಕಿನ ನಾಣಿಕಟ್ಟಾದಲ್ಲಿ ಯಕ್ಷಗಾನ ಅಭಿಮಾನ ಬಳಗವು ಹಮ್ಮಿಕೊಂಡಿದ್ದ ಯಕ್ಷ ವೆಭವ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರನ್ನು ಗೌರವಿಸಲಾಯಿತು.

ಹೆಸರಾಂತ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ತೀರ್ಥಳ್ಳಿ ಗೋಪಾಲಾಚಾರಿ, ತೋಟಿಮನೆ ಗಣಪತಿ ಹೆಗಡೆ, ಧಂಡಿ ಶ್ರೆಪಾದ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಸಹಕಾರಿ ಪ್ರಮುಖ ಎನ್.ಬಿ.ಹೆಗಡೆ ಮತ್ತಿಹಳ್ಳಿ, ಲೇಖಕ ಸುಬ್ರಾಯ ಮತ್ತಿಹಳ್ಳಿ, ಡಾ. ವೆದ್ಯ ಸಿದ್ದಾಪುರ, ಮಹಾಬಲೇಶ್ವರ ಹೆಗಡೆ ಭೂರನ್, ನಟರಾಜ್ ಹೆಗಡೆ, ಸುಧಾಕರ ಹೆಗಡೆ, ರವಿ ಹೆಗಡೆ ಇತರರು ಇದ್ದರು.

ಅನಂತಪದ್ಮನಾಭ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶನ ಕಂಡ ಯಕ್ಷಗಾನದ ಕಷ್ಣಾರ್ಜುನ ಕಾಳಗ ಆಖ್ಯಾನದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ ಕಷ್ಣ, ಕೊಂಡದಕುಳಿ ರಾಮಚಂದ್ರ ಹೆಗಡೆ ಅರ್ಜುನ, ನೀಲ್ಕೋಡ ಶಂಕರ ಸುಭದ್ರೆ, ಕಾಸರಕೋಡ ದಾರುಕ, ಮಾಗಧ-ತೀರ್ಥಳ್ಳಿ ಗೋಪಾಲ ಆಚಾರಿ ಕಷ್ಣ, ತೋಟಿ ಗಣಪತಿ ಹೆಗಡೆ ಮಾಗಧ, ಥಂಡಿಮನೆ ಶ್ರೆಪಾದ ಭಟ್ಟ ದುಷ್ಠಬುದ್ಧಿ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದರು. ಕಾರ್ತಿಕ ಚಿಟ್ಟಾಣಿ ಚಂದ್ರಹಾಸ, ಕಡಬಾಳ ಉದಯ ಹೆಗಡೆ ಮದನನಾಗಿ ಗಮನ ಸೆಳೆದರು. ಹಿಮ್ಮೇಳದ ಕೇಶವ ಹೆಗಡೆ ಕೊಳಗಿ, ರಾಘು ಆಚಾರ್ಯ, ಶಂಕರ ಬ್ರಹ್ಮೂರು ಗಾನ ಮಾಧುರ್ಯದ ಮೂಲಕ ಕಲಾ ಪ್ರದರ್ಶನಕ್ಕೆ ಮೆರಗು ನೀಡಿದರು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ